15 Jun 2024

Bhagavad Gita Abhiyana

 

  • ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಸ್ವರ್ಣವಲ್ಲಿ ಮಠ , ಸೋಂದಾ ಇವರ ಮಾರ್ಗದರ್ಶನದಂತೆ ದಿನಾಂಕ 21-11-2023 ರಿಂದ 27 -11- 2023ರ ವರೆಗೆ ಒಂದು ವಾರಗಳ ಭಗವದ್ಗೀತೆ ಅಭಿಯಾನ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಮಠದ ಮಾತ್ರ ಮಂಡಳಿಯ ಸದಸ್ಯರುಗಳಾದ ಶ್ರೀಮತಿ ವೇದಾ ಹೆಗಡೆ ಹಾಗೂ ಶ್ರೀಮತಿ ಗೀತಾ ಜೋಶಿ ಇವರುಗಳು ಹಾಜರಿದ್ದು ಭಗವದ್ಗೀತೆಯ ಹತ್ತನೇ ಅಧ್ಯಾಯದ ಶ್ಲೋಕಗಳನ್ನು ಬೋಧಿಸಿದರು. ದಿನಾಂಕ 24 -11 -2023ರಂದು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಪಾದ ಪೂಜಾ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ನಡೆಸಲಾಯಿತು. ಶ್ರೀ ಗುರುಗಳು ಆಡಳಿತ ಮಂಡಳಿಗೆ, ನಮ್ಮ ಕಾಲೇಜಿನ ಪ್ರಾಂಶುಪಾಲರಿಗೆ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರಿಗೆ ಮಂತ್ರಾಕ್ಷತೆಯನ್ನು ದಯಪಾಲಿಸಿ ಆಶೀರ್ವದಿಸಿದರು.

Download